ಕರ್ನಾಟಕ ರಾಜ್ಯ ಪತ್ರ
ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ಪತ್ರಿಕೆ
ಭಾಗ – Iಗಿ-ಂ
ಬೆಂಗಳೂರು ಮಂಗಳವಾರ ಮೇ 23 , 2000 (ಜುಲೈ 2 ಶತವರ್ಷ 1922
¸ÀASÉå: D E 3 ¸Á¦AiÉÆÃ 99
ಕರ್ನಾಟಕ ಸರ್ಕಾರದ ಸಚಿವಾಲಯ
ವಿಧಾನ ಸೌಧ,
ಬೆಂಗಳೂರು ದಿನಾಂಕ 19ನೇ ಮೇ 2000
ಅಧಿಸೂಚನೆ
ಕರ್ನಾಟಕ ರಾಜ್ಯ ನೌಕರರ ಸಾಮೂಹಿಕ ವಿಮಾ ಯೋಜನೆ ನಿಯಮಗಳಿಗೆ ಇನ್ನಷ್ಟು ತಿದ್ದುಪಡಿ ಮಾಡುವ ನಿಯಮಗಳ ಕರಡನ್ನು ಅದರಿಂದ ತೊಂದರೆಗೊಳಗಾಗಬಹುದಾದ ಸಂಭವ ವಿರುವ ವ್ಯಕ್ತಿಗಳಿಂದ ಅಧಿಕೃತ ರಾಜ್ಯಪತ್ರದಲ್ಲಿ ಆ ಕರಡು ಪ್ರಕಟವಾದ ದಿನಾಂಕದಿಂದ ಮೂವತ್ತು ದಿನಗಳೊಳಗಾಗಿ ಆಕ್ಷೇಪಣೆಗಳು ಸಲಹೆಗಳನ್ನು ಆಹ್ವಾನಿಸಿ ದಿನಾಂಕ: 22ನೇ ಮಾರ್ಚ್ 2000ರಂದು ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆ ಭಾಗ 4 ರ ಸಿಕ್ಷನ್ -2 ಸಿ (1) ರಲ್ಲಿ ಅಧಿಸೂಚನೆ ಸಂಖ್ಯೆ: ಆಇ 3 ಸಾವಿಯೋ 99 ದಿನಾಂಕ 18ನೇ ಮಾರ್ಚ್ 2000ರಲ್ಲಿ ಕರ್ನಾಟಕ ನಾಗರೀಕ ಸೇವಾ ಅಧಿನಿಯಮ 1978 (ಕರ್ನಾಟಕ ಅಧಿನಿಯಮ 1990 ರ ಸಂಖ್ಯೆ 14ರ) 3ನೇ ಪ್ರಕರಣ (2) ನೇ ಉಪ ಪ್ರಕರಣದ ಖಂಡ (ಎ) ರ ಮೂಲಕ ಅಗತ್ಯಪಡಿಸಲಾದಂತೆ ಪ್ರಕಟಿಸಲಾಗಿರುವುದರಿಂದ ಸದರಿ ರಾಜ್ಯಪತ್ರವನ್ನು ದಿನಾಂಕ : 22ರ ಮಾರ್ಚ್ 2000ರಂದು ಸಾರ್ವಜನಿಕರಿಗೆ ದೊರೆಯುವಂತೆ ಮಾಡಲಾಗಿದ್ದುದರಿಂದ ಈಗ 1978 ರ ಕರ್ನಾಟಕ ಸೇವಾ ಅಧಿನಿಯಮದ (1990ರ ಕರ್ನಾಟಕ ಅಧಿನಿಯಮ ಸಂಖ್ಯೆ: 14) ಪ್ರಕರಣ 8 ರೊಂದಿಗೆ ಓದಿಕೊಳ್ಳಲಾದ 3ನೇ ಪ್ರಕರಣದ 1ನೇ ಉಪ ಪ್ರಕರಣದಿಂದ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಈ ಕೆಳಗಿನ ನಿಯಮಗಳನ್ನು ಈ ಮೂಲಕ ಮಾಡುತ್ತದೆ ಎಂದರೆ:
ನಿಯಮಗಳು
1. ಹೆಸರು ಮತ್ತು ಪ್ರಾರಂಭ:- (1) ಈ ನಿಯಮಗಳನ್ನು ಕರ್ನಾಟಕ ರಾಜ್ಯ ನೌಕರರ ಸಾಮುಹಿಕ ವಿಮಾ ಯೋಜನೆ (ತಿದ್ದುಪಡಿ) ನಿಯಮಗಳು. 2000 ಎಂದು ಕರೆಯತಕ್ಕದ್ದು
(2) ಈ ನಿಯಮಗಳು 200-ರ ಜನವರಿ 1ನೇ ದಿನಾಂಕದಿಂದ ಜಾರಿಗೆ ಬರತಕ್ಕದ್ದು
2. 5ನೇ ನಿಯಮದ ತಿದ್ದುಪಡಿ:- 1981 ರ ಕರ್ನಾಟಕ ರಾಜ್ಯ ನೌಕರರ ಸಾಮೂಹಿಕ ವಿಮಾ ಯೋಜನೆ ನಿಯಮಗಳ (ಇದರಲ್ಲಿ ಇನ್ನು ಮುಂದೆ ಸದರಿ ನಿಯಮಗಳೆಂದು ಉಲ್ಲೇಖಿಸುವ)5ನೇ ನಿಯಮದಲ್ಲಿ 5.1 ಮತ್ತು 5.2ನೇ ಉಪ ನಿಯಮಗಳ ಬದಲಾಗಿ ಈ ಮುಂದಿನ ಉಪ ನಿಯಮಗಳನ್ನು ಪ್ರತ್ಯಾಯೋಜಿಸತಕ್ಕದ್ದು ಎಂದರೆ:-
“5.1 ‘ಯೋಜನೆ’ ಯ ಚಂದಾ ಹಣವು ಪ್ರತಿ ತಿಂಗಳಿಗೆ ರೂ. 60.00 ರ ಯೂನಿಟ್ಗಳಲ್ಲಿರತಕ್ಕದ್ದು ಒಬ್ಬರು ‘ಡಿ’ ವರ್ಗದ ನೌಕರರಿಗೆ ಒಂದು ಯುನಿಟ್ ‘ಸಿ’ ವರ್ಗದ ನೌಕರರಿಗೆ ಎರಡು ಯೂನಿಟ್ ‘ಬ’ ವರ್ಗದ ನೌಕರರಿಗೆ ಮೂರು ಯೂನಿಟ್ ಮತ್ತು ‘ಎ’ ವರ್ಗದ ನೌಕರರಿಗೆ ನಾಲ್ಕು ಯೂನಿಟ್ಗಳ ಚಂದಾ ಹಣವನ್ನು ನೀಡತಕ್ಕದ್ದು ಈ ಪ್ರಕಾರವಾಗಿ ‘ಯೋಜನೆ’ಯ ಸದಸ್ಯನ ಚಂದಾ ಹನದ ದರವು ಕ್ರಮವಾಗಿ ಡಿ.ಸಿ.ಬಿ ಮತ್ತು ಎ ವರ್ಗದ ನೌಕರರಿಗೆ ಪ್ರತಿ ತಿಂಗಳಿಗೆ ರೂ. 60, ರೂ.120, ರೂ.180 ಮತ್ತು ರೂ.240 ಆಗಿರತಕ್ಕದ್ದು
5.2 ಒಂದು ಸಮೂಹದಿಮದ ಇನ್ನೊಂದು ಸಮೂಹಕ್ಕೆ ಒಬ್ಬ ಸದಸ್ಯ ನಿಯತ ಬಡ್ತಿನೇಮಕಾತಿ ಹೊಂದಿದ ಸಂದರ್ಭದಲ್ಲಿ ಆತನ ಚಂದಾ ಹಣವನ್ನು ‘ಯೋಜನೆ’ಯ ಮುಂದಿನ ವರ್ಷದಿಂದ ಅವನು ಬಡ್ತಿ ಅಥವಾ ನೇಮಕ ಹೊಂದಿದಂಥ ಸಮೂಹಕ್ಕೆ ತಕ್ಕದಾದ ಮಟ್ಟಕ್ಕೆ ವರಿಷ್ಠಗೊಳಿಸತಕ್ಕದ್ದು ‘ಯೋಜನೆ’ಯ ಮುಂದಿನ ವರ್ಷದ ಆತನು ಅರ್ಹನಾಗಿದ್ದ ಅದೇ ಮೊಬಲಗಿನ ವಿಮೆಗೆ ಒಳಪಟ್ಟು ಮುಂದುವರೆಯುತ್ತಾನೆ.
ಉದಾಹರಣೆಗೆ ‘ಡಿ’ ದರ್ಜೆಯ ನೌಕರನು 2000ದ ಫೆಬ್ರವರಿಯಲ್ಲಿ ನಿಯತಾಧಾರದ ಮೇಲೆ ‘ಸಿ’ ಸಮೂಹಕ್ಕೆ ಬಡ್ತಿನೇಮಕ ಹೊಂದಿದ್ದರೆ ಪ್ರತಿ ತಿಂಗಳಿಗೆ ರೂ. 60ರ ದರದಲ್ಲಿ ಚಂದಾ ಹಣ ನೀಡುವುದನ್ನು ಡಿಸೆಂಬರ್ 2000ರ ವರೆವಿಗೂ ಮುಂದುವರಿಸಕ್ಕದ್ದು ಮತ್ತು ಆತನ ಚಂದಾ ಹಣಕದಕ್ಕೆ ತಕ್ಕ ಉಳಿತಾಯ ನಿಧಿಯಿಂದ ಬರುವ ಪ್ರಯೋಜನಗಳ ಜೊತೆಗೆ, ಆತನು ರೂ. 60.000 ದ ವಿಮೆಗೆ ಮಾತ್ರ ಅರ್ಹನಾಗುತ್ತಾನೆ 2001 ರ ಜನವರಿಯಿಂದ ಆತನ ಚಂದಾ ಹಣವನ್ನು ಪ್ರತಿ ತಿಂಗಳಿಗೆ ರೂ. 120.00ಕ್ಕೆ ಏರಿಸತಕ್ಕದ್ದು ಮತ್ತು ಆತನು ಉಳಿತಾಯ ನಿಧಿಯಿಂದ ಬರುವ ಸಮುಚಿತ ಪ್ರಯೋಜನೆಗಳ ಜೊತೆಗೆ ರೂ. 1,20,000ಗಳ ವಿಮೆಗೆ ಅರ್ಹನಾಗುತ್ತಾನೆ.
5.2 ಒಂದು ಸಮೂಹದಿಮದ ಇನ್ನೊಂದು ಸಮೂಹಕ್ಕೆ ಒಬ್ಬ ಸದಸ್ಯ ನಿಯತ ಬಡ್ತಿನೇಮಕಾತಿ ಹೊಂದಿದ ಸಂದರ್ಭದಲ್ಲಿ ಆತನ ಚಂದಾ ಹಣವನ್ನು ‘ಯೋಜನೆ’ಯ ಮುಂದಿನ ವರ್ಷದಿಂದ ಅವನು ಬಡ್ತಿ ಅಥವಾ ನೇಮಕ ಹೊಂದಿದಂಥ ಸಮೂಹಕ್ಕೆ ತಕ್ಕದಾದ ಮಟ್ಟಕ್ಕೆ ವರಿಷ್ಠಗೊಳಿಸತಕ್ಕದ್ದು ‘ಯೋಜನೆ’ಯ ಮುಂದಿನ ವರ್ಷದ ಆತನು ಅರ್ಹನಾಗಿದ್ದ ಅದೇ ಮೊಬಲಗಿನ ವಿಮೆಗೆ ಒಳಪಟ್ಟು ಮುಂದುವರೆಯುತ್ತಾನೆ.
ಉದಾಹರಣೆಗೆ ‘ಡಿ’ ದರ್ಜೆಯ ನೌಕರನು 2000ದ ಫೆಬ್ರವರಿಯಲ್ಲಿ ನಿಯತಾಧಾರದ ಮೇಲೆ ‘ಸಿ’ ಸಮೂಹಕ್ಕೆ ಬಡ್ತಿನೇಮಕ ಹೊಂದಿದ್ದರೆ ಪ್ರತಿ ತಿಂಗಳಿಗೆ ರೂ. 60ರ ದರದಲ್ಲಿ ಚಂದಾ ಹಣ ನೀಡುವುದನ್ನು ಡಿಸೆಂಬರ್ 2000ರ ವರೆವಿಗೂ ಮುಂದುವರಿಸಕ್ಕದ್ದು ಮತ್ತು ಆತನ ಚಂದಾ ಹಣಕದಕ್ಕೆ ತಕ್ಕ ಉಳಿತಾಯ ನಿಧಿಯಿಂದ ಬರುವ ಪ್ರಯೋಜನಗಳ ಜೊತೆಗೆ, ಆತನು ರೂ. 60.000 ದ ವಿಮೆಗೆ ಮಾತ್ರ ಅರ್ಹನಾಗುತ್ತಾನೆ 2001 ರ ಜನವರಿಯಿಂದ ಆತನ ಚಂದಾ ಹಣವನ್ನು ಪ್ರತಿ ತಿಂಗಳಿಗೆ ರೂ. 120.00ಕ್ಕೆ ಏರಿಸತಕ್ಕದ್ದು ಮತ್ತು ಆತನು ಉಳಿತಾಯ ನಿಧಿಯಿಂದ ಬರುವ ಸಮುಚಿತ ಪ್ರಯೋಜನೆಗಳ ಜೊತೆಗೆ ರೂ. 1,20,000ಗಳ ವಿಮೆಗೆ ಅರ್ಹನಾಗುತ್ತಾನೆ.
3. 6ನೇ ನಿಯಮದ ಪ್ರತ್ಯಾಯೋಜನೆ ;- ಸದರಿ ನಿಯಮಗಳ 6 ನೇ ನಿಯಮದ ಬದಲಾಗಿ ಈ ಮೂಂದಿನ ನಿಯಮವನ್ನು ಪರತ್ಯಾಯೋಜಿಸತಕ್ಕದ್ದು, ಎಂದರೆ :-
6. ಸದಸ್ಯರು ಹೊರತುಪಡಿಸಿ ನೌಕರರಿಗೆ ಅನ್ವಯಿಸುವ ವಿಮಾ ಕಂತು ಮತ್ತು ವಿಮೆ :- 2000 ದ ಜನವರಿ 1 ರ ನಂತರ ಬರುವ ಜನವರಿ ಹೊರತು ಬೇರೆ ತಿಂಗಳನಲ್ಲಿ ಸೇವೆಗೆ ಸೇರುವ ನೌಕರನಿಗೆ ವಿಮೆಯ ಪ್ರತಿ ರೂ. 60,000-00 ವಿಮಾ ಕಂತೆಂದು ಪ್ರತಿ ತಿಂಗಳಿಗೆ ರೂ. 18-00 ಚಂದಾ ಹಣವನ್ನು ಸಂದಾಯ ಮಾಡಿದ ಮೇಲೆ ಸರ್ಕಾರಿ ಸೇವೆಗೆ ಸೇರುವ ದಿನಾಂಕದವರೆಗೆ, ಆತನು ಯಾವ ಸಮೂಹಕ್ಕೆ ಸೇರಿರುವನೋ ಅದಕ್ಕೆ ಅನ್ವಯವಾಗುವ ವಿಮೆ ಪ್ರಯೋಜನವನ್ನು ನೀಡತಕ್ಕದ್ದು. “ಯೋಜನೆ’ ಯ ವಾರ್ಷಿಕದ ದಿನಾಂಕದಿಂದ ಆತನ್ನು ಮೇಲಿನ ಕಂಡಿಕೆ 5.1 ರಲ್ಲಿ ಸೂಚಿಸಿರುವ ದರದಲ್ಲಿ ಚಂದಾ ಹಣವನ್ನು ಸಂದಾಯ ಮಾಡತಕ್ಕದ್ದು.
ಉದಾಹರಣೆಗೆ, 2000ದ ಫಬ್ರವರಿಯಲ್ಲಿ ಸೇವೆಗೆ ಸೇರುವ ‘ಡಿ’ ಸಮೂಹದ ನೌಕರನು 2000 ದ ಡಿಸೆಂಬರ್ವರೆಗಿನ 11 ತಿಂಗಳುಗಳ ಅವಧಿಗೆ ರೂ. 60,000-00ಗಳ ವಿಮೆಗೆ ವಿಮಾ ಕಂತಾಗಿ ಪ್ರತಿ ತಿಂಗಳಿಗೆ ರೂ. 18-00 ಚಂದಾ ಹಣವನ್ನು ಸಂದಾಯ ಮಾಡತಕ್ಕದ್ದು ಮತ್ತು 2001 ರ ಜನವರಿಯಿಂದ ಆತನ ಚಂದಾ ಹಣವನ್ನು ಪ್ರತಿ ತಿಂಗಳಿಗೆ ರೂ. 60 ಕ್ಕೆ ಏರಿಸತಕ್ಕದ್ದು ಹಾಗೂ ರೂ. 60,000-00 ವಿಮೆಯ ಜೊತೆಗೆ ಉಳಿತಾಯ ನಿಧಿಯಿಂದ ಬರುವ ಪ್ರಯೋಜನಗಳಿಗೆ ಅರ್ಹನಾಗತಕ್ಕದ್ದು. ಅದೇ ರೀತಿಯಾಗಿ, 2000, ಫೆಬ್ರವರಿಯಲ್ಲಿ ಸೇವೆಗೆ ಸೇರುವ ‘ಸಿ’ ಸಮೂಹದ ನೌಕರನು 2000 ದ ಡಿಸೆಂಬರ್ವರೆಗಿನ 11 ತಿಂಗಳುಗಳ ಅವಧಿಗೆ ರೂ. 1,20,000-00 ವಿಮೆಗೆ ಕಂತಾಗಿ ಪ್ರತಿ ತಿಂಗಳಿಗೆ ರೂ. 36-00 ಚಂದಾ ಹಣವನ್ನು ಸಂದಾಯ ಮಾಡತಕ್ಕದ್ದು. ಮತ್ತು 2001 ರ ಜನವರಿಯಿಂದ ಆತನ ಚಂದಾ ಹಣವನ್ನು ಪ್ರತಿ ತಿಂಗಳಿಗೆ ರೂ. 120-00 ಕ್ಕೆ ಏರಿಸತಕ್ಕದ್ದು ಹಾಗೂ ರೂ. 1,20,000-00 ಗಳ ವಿಮೆಯ ಜೊತೆಗೆ ಉಳಿತಾಯ ನಿಧಿಯಿಂದ ಬರುವ ಪ್ರಯೋಜನೆಗಳಿಗೆ ಅರ್ಹನಾಗತಕ್ಕದ್ದು.
4. ನಿಯಮ 8 ಕ್ಕೆ ತಿದ್ದುಪಡಿ :- ಸದರಿ ನಿಯಮಗಳ ಉಪ ನಿಯಮ 8.2 9ಡಿ) ನಂತರ ಹೇಳುವುದನ್ನು ಪ್ರತ್ಯಾಯೋಜಿಸಕ್ಕದ್ದು :-
8. ಹೊಸ ಕೋಷ್ಥಕಗಳು 42 ರಿಂದ 60 ಸೇರ್ಪೆಡೆ :- ಸದರಿ ನಿಯವಗಳ ಕೋಷ್ಥಕ 41 ರ ನಮತರ ಮುಂದಿನ ಕೋಷ್ಥಕಗಳನ್ನು ಪ್ರತ್ಯಾಯೋಜಿಸತಕ್ಕದ್ದು.
8.2 (ಇ) 2000 ದ ಜನವರಿ ಮೊದಲನೆ ದಿನಾಂಕದಿಂದ ಜಾರಿಗೆ ಬರುವಂತೆ ಉಳಿತಾಯ ನಿಧಿಯಿಂದ ಅಂಗೀಕಾರಾರ್ಹವಾದ ಸೌಲಭ್ಯವನ್ನು ಕೋಷ್ಠಕ 42 ರಲ್ಲಿ ಸೂಚಿಸಲಾಗಿದೆ. ಈ ಕೋಷ್ಥಕವು 2000ದ ಜನವರಿ ಮೊದಲನೇ ದಿನಾಂಕದಂದು ಅಥವಾ ಆತರುವಾಯ ಯೋಜನೆಯ ಸದಸ್ಯನಾಗಿ ಸೇರಿದ ನೌಕರನಿಗೆ ಅನ್ವಯವಾಗತಕ್ಕದ್ದು. ಆದಿನಾಂಕಕ್ಕೆ ಮುಂದೆ ಅಥವಾ ಹಾಗಿಲ್ಲದೆ ಇತರ ರೀತಿಯಲ್ಲಿ ಸದಸ್ಯತ್ವವು ಕೊನೆಗೊಳ್ಳುವ ನೌಕರನ ಸಂಬಂಧದಲ್ಲಿ 2000ದ ಜನವರಿ ಮೊದಲನೆ ದಿನಾಂಕದಿಂದ ಜಾರಿಗೆ ಬರುವಂತೆ ಉಳಿತಾಯ ನಿಧಿಯಿಮದ ಅಂಗೀಕಾರಾರ್ಹವಾದ ಸೌಲಭ್ಯಗಳು ಮುಂದೆ ಹೊರಡಿಸಲಾಗುವ ಆದೇಶಗಳವರೆಗೆ ಜಾರಿಯಲ್ಲಿರತಕ್ಕದ್ದು.”
5. ತಾತ್ಕಾಲಿಕ ಉಪಬಂಧ :- ಸದರಿ ನಿಯಮಗಳಲ್ಲಿ ಏನೇ ಇದ್ದರೂ, ಈ ನಿಯಮಗಳ ಮೂಲ ತಿದ್ದುಪಡಿ ಮಾಡಿರುವ ಸದರಿ ನಿಯಮಗಳ ಮೂಲಕ ಗೊತ್ತುಪಡಿಸಿರುವಂತಹ ಚಂದಾ ಹಣ ವಿಮಾ ಕಂತಿನ ಪರಿಷ್ಕತ ದರಗಳ ಕಾರಣದಿಂದಾಗಿ, ಚಂದಾ ಹಣದ ವಿಮಾ ಕಂತಿನ ಬಾಕಿಗಳನ್ನು 2000 ಜನವರಿ 1 ರಿಮದ ಪ್ರಾರಂಭವಾಗುವ ಮತ್ತು 2000ದ ಮೇ 31 ಕ್ಕೆ ಮುಕ್ತಾಯವಾಗುವ ಅವಧಿ ಪರಿಷ್ಕøತ ದರಗಳಲ್ಲಿ 2000ದ ಜೂನ್ ತಿಂಗಳ ಚಂದಾ ಹಣ/ವಿಮಾ ಕಂತಿನೊಡನೆ 2000ದ ಜೂನ ತಿಂಗಳಿಗೆ ಎಲ್ಲಾ ಸದಸ್ಯರು/ನೌಕರರಿಗೆ ಸಂದಾಯ ಮಾಡಬೇಕಾದ ಸಂಬಳದಿಂದ ವಸೂಲಿ ಮಾಡತಕ್ಕದ್ದು.
ಪರಂತು 2000 ದ ಜನವರಿ 1 ರ ನಂತರ, ಅಂದರೆ, 2000ದ ಮೇ 31 ಕ್ಕೆ ಮೊದಲು ಸೇವೆಯಲ್ಲಿರುವಾಗ ಮರಣ ಹೊಂದಿರುವ ಸದಸ್ಯರು/ನೌಕರರ ಸಂದರ್ಭ ಮರಣ ಸಂಭವಿಸಿದ ತಿಂಗಳ ಕೊನೆಯ ದಿನದೊಂದಿಗೆ ಮುಕ್ತಾಯವಾಗುವ ಅವಧಿಯ ವಂತಿಗೆ/ವಿಮಾ ಕಂತುಗಳ ಬಾಕಿಗಳನ್ನು ಸಂಭಳ ಅಥವಾ ಉಪದಾನದ ಬಾಕಿಗಳಿಂದ ಅಥವಾ ಅವರ ಸಂಬಂಧದಲ್ಲಿ ಯೋವ ಮೇರೆಗೆ ಸಂದಾಯ ಮಾಡತಕ್ಕ ಮೊಬಲಗುಗಳಿಂದ ವಸೂಲು ಮಾಡತಕ್ಕದ್ದು. 8. ಹೊಸ ಕೋಷ್ಥಕಗಳು 42 ರಿಂದ 60 ಸೇರ್ಪೆಡೆ :- ಸದರಿ ನಿಯವಗಳ ಕೋಷ್ಥಕ 41 ರ ನಮತರ ಮುಂದಿನ ಕೋಷ್ಥಕಗಳನ್ನು ಪ್ರತ್ಯಾಯೋಜಿಸತಕ್ಕದ್ದು.
ಕರ್ನಾಟಕ ರಾಜ್ಯಪಾಲರ ಆದೇಶದ ಮೇರೆಗೆ
ಮತ್ತು ಅವರ ಹೆಸರಿನಲ್ಲಿ
( ಎಲ್.ಶ್ರೀ ನಿವಾಸನ್ )
ಸರ್ಕಾರದ ಅಧೀನ ಕಾರ್ಯದರ್ಶಿ ಆರ್ಥಿಕ ಇಲಾಖೆ.
ಗೆ,
ಸಂಕಲನಕಾರರು, ಕರ್ನಾಟಕ ರಾಜ್ಯಪತ್ರ , ಬೆಂಗಳೂರು ಇವರಿಗೆ ಈ ಆಧಿಸೂಚನೆಯನ್ನು ವಿಶೇಷ ರಾಜ್ಯಪತ್ರದಲ್ಲಿ ಪ್ರಕಟಿಸತಕ್ಕದ್ದು.